PM Kisan : ಪಿಎಂ ಕಿಸಾನ್ ಯೋಜನೆಯಡಿ ಗಂಡ-ಹೆಂಡತಿ ಇಬ್ಬರೂ ₹6000 ಪಡೆಯಬಹುದೇ? ಈ ಪ್ರಮುಖ ನಿಯಮ ತಿಳಿದುಕೊಳ್ಳಿ

ಇಲ್ಲಿಯವರೆಗೆ ಈ ಯೋಜನೆಯ ಅರ್ಹತೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. ಉದಾಹರಣೆಗೆ, ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಯ ಲಾಭವನ್ನು ಪಡೆಯಬಹುದೇ? ಅದರ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ..

Written by - Channabasava A Kashinakunti | Last Updated : Oct 10, 2021, 09:10 AM IST
  • ಪಿಎಂ ಕಿಸಾನ್ ಯೋಜನೆಯ ಅರ್ಹತೆ ತಿಳಿಯಿರಿ
  • 9 ನೇ ಕಂತಿನ ಹಣ ರೈತರ ಖಾತೆಗೆ ಪಾವತಿಸಲಾಗಿದೆ
  • ಈ ಯೋಜನೆಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ತಿಳಿದುಕೊಳ್ಳಿ
PM Kisan : ಪಿಎಂ ಕಿಸಾನ್ ಯೋಜನೆಯಡಿ ಗಂಡ-ಹೆಂಡತಿ ಇಬ್ಬರೂ ₹6000 ಪಡೆಯಬಹುದೇ? ಈ ಪ್ರಮುಖ ನಿಯಮ ತಿಳಿದುಕೊಳ್ಳಿ title=

ನವದೆಹಲಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಸರ್ಕಾರವು ರೈತರ ಖಾತೆಗೆ ವಾರ್ಷಿಕವಾಗಿ 6000 ರೂಪಾಯಿಯನ್ನು 2000 ರೂ. ಕಂತುಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ. 10 ನೇ ಕಂತು ರೈತರ ಖಾತೆಗೆ ಶೀಘ್ರದಲ್ಲಿ ಜಮಾ ಮಾಡಲಿದೆ ಆದರೆ, ಇಲ್ಲಿಯವರೆಗೆ ಕೆಲ ರೈತರಿಗೆ 9 ನೇ ಕಂತಿನ ಹಣ ಖಾತೆಗೆ ಜಮಾ ಆಗಿಲ್ಲ. ಇಲ್ಲಿಯವರೆಗೆ ಈ ಯೋಜನೆಯ ಅರ್ಹತೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. ಉದಾಹರಣೆಗೆ, ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಯ ಲಾಭವನ್ನು ಪಡೆಯಬಹುದೇ? ಅದರ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ..

ಯಾರಿಗೆ ಲಾಭ ಸಿಗುತ್ತದೆ ಗೊತ್ತಾ?

ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಲಾಭ ಪಡೆಯಲು ಸಾಧ್ಯವಿಲ್ಲ. ಹೀಗೆ ಯಾರಾದರೂ ಇದನ್ನು ಮಾಡಿದರೆ, ಸರ್ಕಾರವು ಆತನಿಂದ ಇಷ್ಟು ದಿನ ನಿದಾ ಹಣ ವಾಪಸ್ ಪಡೆಯುತ್ತದೆ ಮತ್ತೆ ದಂಡ ವಿಧಿಸುವ ಸಂಭವವಿದೆ, ಇದಲ್ಲದೇ, ಇಂತಹ ಅನೇಕ ನಿಬಂಧನೆಗಳು ರೈತರನ್ನು ಅನರ್ಹರನ್ನಾಗಿಸುತ್ತವೆ. ರೈತ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸುತ್ತಿದ್ದಾರೆ. ಈ ಯೋಜನೆಯ ಲಾಭ ಸಿಗುವುದಿಲ್ಲ. ಅಂದರೆ, ಸಂಗಾತಿಗಳಲ್ಲಿ ಯಾರಾದರೂ ಕಳೆದ ವರ್ಷ ಆದಾಯ ತೆರಿಗೆಯನ್ನು ಪಾವತಿಸಿದ್ದರೆ, ಅವರು ಈ ಯೋಜನೆಯ ಲಾಭವನ್ನು ಪಡೆಯುವುದಿಲ್ಲ.

ಯಾರು ಅನರ್ಹರು?

ಒಬ್ಬ ರೈತ ತನ್ನ ಕೃಷಿ ಭೂಮಿ(Agriculture Land)ಯನ್ನು ಕೃಷಿ ಕೆಲಸಕ್ಕೆ ಬಳಸದೆ, ಇತರ ಕೆಲಸಗಳನ್ನು ಮಾಡುತ್ತಿದ್ದರೆ ಅಥವಾ ಇತರರ ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದರೆ ಮತ್ತು ಹೊಲವು ಅವನಿಗೆ ಸೇರಿಲ್ಲ. ಅಂತಹ ರೈತರಿಗೂ ಈ ಯೋಜನೆಯ ಲಾಭ ಪಡೆಯಲು ಅರ್ಹತೆ ಇಲ್ಲ. ಒಬ್ಬ ರೈತ ಬೇಸಾಯ ಮಾಡುತ್ತಿದ್ದರೆ, ಆದರೆ ಹೊಲವು ಅವನ ಹೆಸರಿನಲ್ಲಿಲ್ಲ ಆದರೆ ಅವನ ತಂದೆ ಅಥವಾ ಅಜ್ಜನ ಹೆಸರಿನಲ್ಲಿ ಇದ್ದರೆ, ಅವನು ಕೂಡ ಈ ಯೋಜನೆಯ ಲಾಭವನ್ನು ಪಡೆಯುವುದಿಲ್ಲ.

ಇವರು ಈ  ಪ್ರಯೋಜನಗಳನ್ನು ಸಹ ಪಡೆಯಲು ಸಾಧ್ಯವಿಲ್ಲ

ಯಾರಾದರೂ ಕೃಷಿ ಭೂಮಿಯ ಮಾಲೀಕರಾಗಿದ್ದರೆ, ಆದರೆ ಅವರು ಸರ್ಕಾರಿ ಉದ್ಯೋಗಿಯಾಗಿದ್ದರೆ ಅಥವಾ ನಿವೃತ್ತ(Retirement Officer)ರಾಗಿರುವ, ಕುಳಿತಲ್ಲಿರುವ ಅಥವಾ ಮಾಜಿ ಸಂಸದ, ಎಂಎಲ್‌ಎ, ಸಚಿವರಾಗಿದ್ದರೆ, ಅಂತಹ ಜನರು ಕೂಡ ರೈತ ಯೋಜನೆಯ ಲಾಭಕ್ಕೆ ಅನರ್ಹರು. ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಅವರ ಕುಟುಂಬದ ಸದಸ್ಯರು ಕೂಡ ಅನರ್ಹರ ಪಟ್ಟಿಯಲ್ಲಿ ಬರುತ್ತಾರೆ. ಆದಾಯ ತೆರಿಗೆ ಪಾವತಿಸುವ ಕುಟುಂಬಗಳು ಕೂಡ ಈ ಯೋಜನೆಯ ಲಾಭವನ್ನು ಪಡೆಯುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News