ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಜಯ್ ಮಲ್ಯ ಬಗ್ಗೆ ನೀಡಿದ್ದ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚಿಗೆ ನಿತಿನ್ ಗಡ್ಕರಿ ಅವರು ವಿಜಯ್ ಮಲ್ಯ ಅವರನ್ನು ವಂಚಕ ಎಂದು ಪರಿಗಣಿಸಬಾರದು ಎಂದು ಹೇಳಿಕೆ ನೀಡಿದ್ದರು.ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತೆ ಸ್ಪಷ್ಟೀಕರಣ ನೀಡಿರುವ ಅವರು " ಒಂದು ವೇಳೆ ವಿಜಯ್ ಮಲ್ಯ ಏನಾದರೂ ತಪ್ಪು ಮಾಡಿದ್ರೆ ಅವರ ಮೇಲೆ ತನಿಖೆ ನಡೆಯುತ್ತಿದೆ.ಅನಂತರ ಅದು ಸರಿಯೋ ಸೂಕ್ತವೋ ಎನ್ನುವುದನ್ನು ತಿರ್ಮಾನಿಸುತ್ತದೆ. ಮಲ್ಯ ಅವರ ಖಾತೆಯೂ 40 ವರ್ಷಗಳಷ್ಟು ಹಳೆಯದಾಗಿದೆ. ಆದರೆ ಅದು 41ನೇ ವರ್ಷದಲ್ಲಿ ಹೀಗಾಗಿದೆ. ಬಿಸಿನೆಸ್ ನಲ್ಲಿ ಹೀಗೆ ಏರಿಳಿತ ಸಾಮಾನ್ಯ.ಆದರೆ ನನ್ನ ಎರಡು ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದರು.
ಇನ್ನು ಮಲ್ಯ ತಮ್ಮ ಮೇಲೆ ಬಂದಿರುವ ಬ್ಯಾಂಕ್ ವಂಚನೆ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಈ ಆರೋಪಗಳೆಲ್ಲವು ಕೂಡ ಸುಳ್ಳು ತಾವು ತಗೆದುಕೊಂಡಿರುವ ಸಾಲವನ್ನು ವಾಪಸ್ ತಿರಿಸುವುದಾಗಿ ತಿಳಿಸಿದ್ದಾರೆ.