ಚುನಾವಣಾ ಠೇವಣಿಗೆ 1 ರೂ ದಂತೆ 10,000 ರೂ ನಾಣ್ಯಗಳನ್ನು ನೀಡಿದ ಅಭ್ಯರ್ಥಿ...!

2019 ರಲ್ಲಿ ಗುಜರಾತ್ ರಾಜಧಾನಿ ಗಾಂಧಿನಗರದ ತನ್ನ ಕೊಳೆಗೇರಿ ಕಾಲೋನಿಯನ್ನು ಹೋಟೆಲ್ ನಿರ್ಮಿಸಲು ಧ್ವಂಸಗೊಳಿಸಿದ ನಂತರ ಈಗ ಕೊಳಗೇರಿ ದಿನಗೂಲಿ ಕೆಲಸಗಾರನು ತನ್ನ ಬೆಂಬಲಿಗರಿಂದ ₹ 10,000 ರೂಪಾಯಿಯ 1 ನಾಣ್ಯವನ್ನು ಸಂಗ್ರಹಿಸಿದ್ದು ಅದನ್ನು ಮುಂದಿನ ದಿನಗಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಚುನಾವಣಾ ಆಯೋಗಕ್ಕೆ ಠೇವಣಿ ಸಲ್ಲಿಸಿದ್ದಾನೆ.

Written by - Zee Kannada News Desk | Last Updated : Nov 19, 2022, 03:40 PM IST
  • ಈಗ ಈ ಕುರಿತಾಗಿ ಪಿಟಿಐ ಜೊತೆ ಮಾತನಾಡಿರುವ ಅವರು "ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ.
  • ನಾನು ಕೂಲಿ ಕಾರ್ಮಿಕರ ಕುಟುಂಬಕ್ಕೆ ಸೇರಿದ್ದೇನೆ ಮತ್ತು ದಿನಗೂಲಿಯಾಗಿ ಜೀವನ ನಡೆಸುತ್ತಿದ್ದೇನೆ.
  • ದೊಡ್ಡ ಹೋಟೆಲ್ ನಿರ್ಮಿಸಲು 521 ಗುಡಿಸಲುಗಳನ್ನು ನೆಲಸಮಗೊಳಿಸಲಾಗಿದೆ.
ಚುನಾವಣಾ ಠೇವಣಿಗೆ 1 ರೂ ದಂತೆ 10,000 ರೂ ನಾಣ್ಯಗಳನ್ನು ನೀಡಿದ ಅಭ್ಯರ್ಥಿ...!  title=

ನವದೆಹಲಿ: 2019 ರಲ್ಲಿ ಗುಜರಾತ್ ರಾಜಧಾನಿ ಗಾಂಧಿನಗರದ ತನ್ನ ಕೊಳೆಗೇರಿ ಕಾಲೋನಿಯನ್ನು ಹೋಟೆಲ್ ನಿರ್ಮಿಸಲು ಧ್ವಂಸಗೊಳಿಸಿದ ನಂತರ ಈಗ ಕೊಳಗೇರಿ ದಿನಗೂಲಿ ಕೆಲಸಗಾರನು ತನ್ನ ಬೆಂಬಲಿಗರಿಂದ ₹ 10,000 ರೂಪಾಯಿಯ 1 ನಾಣ್ಯವನ್ನು ಸಂಗ್ರಹಿಸಿದ್ದು ಅದನ್ನು ಮುಂದಿನ ದಿನಗಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಚುನಾವಣಾ ಆಯೋಗಕ್ಕೆ ಠೇವಣಿ ಸಲ್ಲಿಸಿದ್ದಾನೆ.

ಗಾಂಧಿನಗರ ಉತ್ತರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿರುವ ಮಹೇಂದ್ರ ಪಟ್ನಿ ಈ ವಾರದ ಆರಂಭದಲ್ಲಿ ನಾಣ್ಯಗಳಲ್ಲಿ ಭದ್ರತಾ ಠೇವಣಿ ಪಾವತಿಸಿದ್ದಾನೆ.ಮೂರು ವರ್ಷಗಳ ಹಿಂದೆ ನೆಲಸಮಗೊಂಡ ಗಾಂಧಿನಗರದ ಮಹಾತ್ಮ ಮಂದಿರದ ಬಳಿಯ ಕೊಳೆಗೇರಿಯ 521 ಗುಡಿಸಲುಗಳ ಸ್ಥಳಾಂತರಗೊಂಡ ನಿವಾಸಿಗಳು ತಮ್ಮ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿಕೊಂಡಿದ್ದಾರೆ.

ಶ್ರೀ ಪಟ್ನಿ ಅವರು ಎರಡು ಬಾರಿ ಸ್ಥಳಾಂತರಗೊಂಡ ಕೊಳೆಗೇರಿ ನಿವಾಸಿಗಳಲ್ಲಿ ಒಬ್ಬರಾಗಿದ್ದರು, ಮೊದಲು 2010 ರಲ್ಲಿ ಸರ್ಕಾರವು ಮಹಾತ್ಮ ಗಾಂಧಿಯವರಿಗೆ ಮೀಸಲಾಗಿರುವ ದಂಡಿ ಕುಟೀರ್ ವಸ್ತುಸಂಗ್ರಹಾಲಯವನ್ನು ಹೋಟೆಲ್‌ನಿಂದ ಸ್ವಲ್ಪ ದೂರದಲ್ಲಿ ನಿರ್ಮಿಸಿದಾಗ ತಾವು ವಾಸಿಸುವ ಜಾಗವನ್ನು ಖಾಲಿ ಮಾಡಬೇಕಾಗಿ ಬಂತು, ಇದಾದ ನಂತರ 2019 ರಲ್ಲಿ ಸ್ಲಂ ನಿವಾಸಿಗಳು ಮತ್ತೆ ಬಲವಂತವಾಗಿ ಹತ್ತಿರದ ಪ್ರದೇಶದಲ್ಲಿ ಹೋಟೆಲ್ ಅನ್ನು ಭೂಮಿಯಲ್ಲಿ ನಿರ್ಮಿಸಬೇಕಾಗಿದ್ದರಿಂದ ಆ ಪ್ರದೇಶದಿಂದ ಖಾಲಿ ಮಾಡಬೇಕಾಯಿತು.

ಇದನ್ನೂ ಓದಿ: Viral Post: ಅಣೆಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಕೊಟ್ಟ ಉತ್ತರ ನೋಡಿ ತಲೆಕೆರೆದುಕೊಂಡ ಶಿಕ್ಷಕ!

ಈಗ ಈ ಕುರಿತಾಗಿ ಪಿಟಿಐ ಜೊತೆ ಮಾತನಾಡಿರುವ ಅವರು "ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ. ನಾನು ಕೂಲಿ ಕಾರ್ಮಿಕರ ಕುಟುಂಬಕ್ಕೆ ಸೇರಿದ್ದೇನೆ ಮತ್ತು ದಿನಗೂಲಿಯಾಗಿ ಜೀವನ ನಡೆಸುತ್ತಿದ್ದೇನೆ. ದೊಡ್ಡ ಹೋಟೆಲ್ ನಿರ್ಮಿಸಲು 521 ಗುಡಿಸಲುಗಳನ್ನು ನೆಲಸಮಗೊಳಿಸಲಾಗಿದೆ. ಅವರಲ್ಲಿ ಅನೇಕರಿಗೆ ಕೆಲಸವಿಲ್ಲ. ನಾವು ಹತ್ತಿರದ ಪ್ರದೇಶದ ಒಂದು ಮನೆಗೆ ಸ್ಥಳಾಂತರಗೊಂಡಿದ್ದೇವೆ, ಆದರೆ ನೀರು ಅಥವಾ ವಿದ್ಯುತ್ ಸರಬರಾಜು ಇಲ್ಲ, ”ಎಂದು ತಿಳಿಸಿದ್ದಾರೆ.

ಸರ್ಕಾರದ ನಿರಾಸಕ್ತಿಯಿಂದ ನೊಂದ ಕೊಳಗೇರಿ ನಿವಾಸಿಗಳು ಹಾಗೂ ಇತರ ದಿನಗೂಲಿ ಕಾರ್ಮಿಕರು ₹ 10,000 ರೂ. ನಾಣ್ಯದಲ್ಲಿ ಸಂಗ್ರಹಿಸಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಠೇವಣಿಯನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

"ಸ್ಥಳಾಂತರಗೊಳ್ಳುವ ಮೊದಲು, ನಾವು ನಮ್ಮ ಕೊಳೆಗೇರಿಯಲ್ಲಿ ವಿದ್ಯುತ್ ಸಂಪರ್ಕವನ್ನು ಹೊಂದಿದ್ದೆವು, ಆದರೆ ನಾವು ಹೋಟೆಲ್ ಬಳಿಯ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಲು ಒತ್ತಾಯಿಸಲ್ಪಟ್ಟ ನಂತರ, ನೀರು ಅಥವಾ ವಿದ್ಯುತ್ ಇಲ್ಲ ಮತ್ತು ಯಾವುದೇ ರಾಜಕಾರಣಿ ನಮ್ಮ ಸಹಾಯಕ್ಕೆ ಬರಲಿಲ್ಲ" ಎಂದು ಪಟ್ನಿ ಹೇಳಿದರು.ಸ್ಥಳೀಯ ಅಧಿಕಾರಿಗಳು ಈಗಿರುವ ಸ್ಥಳವನ್ನೂ ತೊರೆಯುವಂತೆ ಒತ್ತಾಯಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: Shraddha Murder Case: “ಮೋದಿ ಸರ್ಕಾರದಿಂದಾಗಿ ಶ್ರದ್ಧಾ ಪ್ರಕರಣದಂತೆ ಅನೇಕ ಘಟನೆಗಳು ಸಂಭವಿಸಿವೆ”

"ಚುನಾವಣೆಗಳು ಸಮೀಪಿಸುತ್ತಿರುವಾಗ, ಕೆಲವು ಸರ್ಕಾರಿ ಪ್ರತಿನಿಧಿಗಳು ಮತ್ತು ರಾಜಕಾರಣಿಗಳು ನಮಗೆ ಭೇಟಿ ನೀಡುತ್ತಾರೆ ಮತ್ತು ಕೆಲವು ಭರವಸೆಗಳನ್ನು ಅವರು ನಂತರ ಅನುಕೂಲಕರವಾಗಿ ಮರೆತುಬಿಡುತ್ತಾರೆ. ಇದು 1990 ರ ದಶಕದಿಂದಲೂ ನಡೆಯುತ್ತಿದೆ" ಎಂದು ಸ್ವತಂತ್ರ ಅಭ್ಯರ್ಥಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News