ಕಾಂಗ್ರೆಸ್‌ಗೆ ಮುಸ್ಲಿಂ ಲೀಗ್ ವೈರಸ್ ತಗುಲಿದೆ, ಅಧಿಕಾರಕ್ಕೆ ಬಂದರೆ ದೇಶ ನಾಶ: ಯೋಗಿ ಆದಿತ್ಯನಾಥ್

ದೇಶದ ವಿಭಜನೆಗೆ ಕಾರಣವಾದ ಅದೇ ಮುಸ್ಲಿಂ ಲೀಗ್​ನೊಂದಿಗೆ ಕಾಂಗ್ರೆಸ್​ ಕೈ ಜೋಡಿಸಿದೆ ಎಂದು ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.

Last Updated : Apr 5, 2019, 12:43 PM IST
ಕಾಂಗ್ರೆಸ್‌ಗೆ ಮುಸ್ಲಿಂ ಲೀಗ್ ವೈರಸ್ ತಗುಲಿದೆ, ಅಧಿಕಾರಕ್ಕೆ ಬಂದರೆ ದೇಶ ನಾಶ: ಯೋಗಿ ಆದಿತ್ಯನಾಥ್  title=

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವುದನ್ನು ತೀವ್ರವಾಗಿ ಟೀಕಿಸಿದ್ದಾರೆ.

ಕೇರಳದ ಮುಸ್ಲಿಂ ಲೀಗ್​ನ ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಗೆಲ್ಲಲು ರಾಹುಲ್ ಗಾಂಧಿ ಬಯಸುತ್ತಿದ್ದಾರೆ. ದೇಶದ ವಿಭಜನೆಗೆ ಕಾರಣವಾದ ಅದೇ ಮುಸ್ಲಿಂ ಲೀಗ್​ನೊಂದಿಗೆ ಕಾಂಗ್ರೆಸ್​ ಕೈ ಜೋಡಿಸಿದೆ ಎಂದು ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕಾಂಗ್ರೆಸ್ ಮುಸ್ಲಿಂ ಲೀಗ್ ಎಂಬ ಸೋಂಕಿನೊಂದಿಗೆ ಮೈತ್ರಿಯಾಗಿದೆ. ಈ ವೈರಸ್ ತಗುಲಿದವರು ಯಾರೂ ಉಳಿಯುವುದಿಲ್ಲ. ಈಗಾಗಲೇ ವಿರೋಧ ಪಕ್ಷ ಕಾಂಗ್ರೆಸ್ ಈ ಸೋಂಕಿಗೆ ಒಳಗಾಗಿದ್ದು, ಚುನಾವಣೆಯಲ್ಲಿ ಗೆದ್ದರೆ ಏನಾಗಬಹುದು ನೀವೇ ಯೋಚಿಸಿ... ಈ ವೈರಸ್ ದೇಶಾದ್ಯಂತ ಹರಡುತ್ತದೆ" ಎಂದಿದ್ದಾರೆ. 

"1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಇಡೀ ರಾಷ್ಟ್ರವು ಬ್ರಿಟೀಷರ ವಿರುದ್ಧ ಮಂಗಲ್ ಪಾಂಡೆಯೊಂದಿಗೆ ಹೋರಾಡಿತ್ತು. ನಂತರ ಈ ಮುಸ್ಲಿಂ ಲೀಗ್ ವೈರಸ್ ಬಂದು ಇಡೀ ದೇಶವನ್ನೇ ಹರಡಿ ವಿಭಜಿಸಿತು. ಇಂದು ಅದೇ ಸ್ಥಿತಿ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಹಸಿರು ಧ್ವಜಗಳು ಮತ್ತೆ ಹಾರಾಡುತ್ತಿವೆ. ಕಾಂಗ್ರೆಸ್ ಮುಸ್ಲಿಂ ಲೀಗ್ ವೈರಸ್ ನಿಂದ ಸೊಂಕಿತವಾಗಿದೆ. ಎಚ್ಚರವಾಗಿರಿ" ಎಂದು ಯೋಗಿ ಹೇಳಿದ್ದಾರೆ. 

Trending News