ಬಂಗಾರ ಕೊಡಿಸು ಅಂತಾ ಹೆಂಡತಿ ಟಾರ್ಚರ್: ಬೇಸತ್ತು ನವವಿವಾಹಿತ ಸೂಸೈಡ್‌

ಹೆಂಡತಿ ಕಾಟ ತಾಳಲಾರದೇ ನವವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್‌ ಸಿಟಿಯ ಉಲ್ಲಾಳದ ಬಳಿಯ ಎಂವಿ ಲೇಔಟ್ನಲ್ಲಿ ನಡೆದಿದೆ. ಮಹೇಶ್ವರ ಮೃತ ದುರ್ದೈವಿಯಾಗಿದ್ದಾನೆ. 

Written by - VISHWANATH HARIHARA | Edited by - Krishna N K | Last Updated : Dec 14, 2022, 06:56 PM IST
  • ಹೆಂಡತಿ ಕಾಟ ತಾಳಲಾರದೇ ನವವಿವಾಹಿತ ಆತ್ಮಹತ್ಯೆ
  • ಸಿಲಿಕಾನ್‌ ಸಿಟಿಯ ಉಲ್ಲಾಳದ ಬಳಿಯ ಎಂವಿ ಲೇಔಟ್ನಲ್ಲಿ ನಡೆದ ಘಟನೆ
  • ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳಂತೆ ಸುಂದರ ಹೆಂಡತಿ
ಬಂಗಾರ ಕೊಡಿಸು ಅಂತಾ ಹೆಂಡತಿ ಟಾರ್ಚರ್: ಬೇಸತ್ತು ನವವಿವಾಹಿತ ಸೂಸೈಡ್‌ title=

ಬೆಂಗಳೂರು : ಹೆಂಡತಿ ಕಾಟ ತಾಳಲಾರದೇ ನವವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್‌ ಸಿಟಿಯ ಉಲ್ಲಾಳದ ಬಳಿಯ ಎಂವಿ ಲೇಔಟ್ನಲ್ಲಿ ನಡೆದಿದೆ. ಮಹೇಶ್ವರ ಮೃತ ದುರ್ದೈವಿಯಾಗಿದ್ದಾನೆ. 

ಕಳೆದ 21-08 -2022 ರಂದು ಕವನಾ ಎಂಬಾಕೆಯ ಜೊತೆ ಮಹೇಶ್ವರ ಸಪ್ತಪದಿ ತುಳಿದಿದ್ದ. ಆದರೆ ಮದುವೆಯಾದ ಮೇಲೆ ಹೆಂಡತಿ ಕವನಾ ಪ್ರತಿದಿನ ಟಾರ್ಚರ್‌ ಕೊಡುತ್ತಿದ್ದಳು. ನಾನು ಐಷಾರಾಮಿ ಜೀವನ ನಡೆಸಬೇಕು. ನನಗೆ ಚಿನ್ನಾಭರಣ ಬೇಕು ಎಂದು ಪ್ರತಿ ನಿತ್ಯ ಪೀಡಿಸುತ್ತಿದ್ದಳಂತೆ. ಇದಕ್ಕೆ ಮಹೇಶ್ವರ ಸ್ಪಂದಿಸದಿದ್ದಾಗ ಅವಾಚ್ಯ ಶಬ್ದಗಳಿಂದ ಕವನಾ ನಿಂದಿಸುತ್ತಿದ್ದಳು ಎಂಬ ಆರೋಪ ಸಹ ಇದೆ. 

ಇದನ್ನೂ ಓದಿ: ಮಲೆ ಮಹದೇಶ್ವರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಿಎಂ ಬೊಮ್ಮಾಯಿ

ಗಂಡ ಹೆಂಡತಿ ಜಗಳ ತಾರಕಕ್ಕೇರಿದ್ದರಿಂದ ಇಬ್ಬರ ಕುಟುಂಬದ ಹಿರಿಯರು ಬುದ್ದಿವಾದ ಹೇಳಿದ್ದರು. ಆದರೆ ಕವನಾ ಮಾತ್ರ ಹಿರಿಯರಿಗೂ ಬೆಲೆ ಕೊಡದೆ ಅವಮಾನಿಸಿದ್ದಳು ಎನ್ನಲಾಗಿದೆ. ಹೆಂಡತಿ ವರ್ತನೆಯಿಂದ ಬೇಸತ್ತು ಮಹೇಶ್ವರ ಮಾನಸಿಕ ಹಿಂಸೆ ಅನುಭವಿಸಿದ್ದ. ಪ್ರತಿದಿನ ಹೆಂಡತಿ ಕಿರುಕುಳ ತಾಳಲಾಗದೇ ಕಳೆದ ಐದು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಇತ್ತ ಮಹೇಶ್ವರನ ಕುಟುಂಬಸ್ಥರು ಕವನಾ ಕಿರುಕುಳವೇ ಮಹೇಶ್ವರನ ಆತ್ಮಹತ್ಯೆಗೆ ಕಾರಣ ಎಂದು ದೂರಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಜ್ಞಾನಭಾರತಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News