PM Kisan: ಇನ್ಮುಂದೆ ಈ ರಾಜ್ಯದ ರೈತರಿಗೆ ಪ್ರತಿ ವರ್ಷ ಸಿಗುತ್ತೆ 12 ಸಾವಿರ ರೂ. ಹಣ

PM Kisan: ದೇಶದ ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕವಾಗಿ ಆರು ಸಾವಿರ ರೂಪಾಯಿಗಳನ್ನು ನೀಡುತ್ತದೆ. ಇದೀಗ, ಈ ರಾಜ್ಯ ಸರ್ಕಾರ ಕಿಸಾನ್-ಕಲ್ಯಾಣ ಯೋಜನೆ ಅಡಿಯಲ್ಲಿ ರೈತರಿಗೆ 6 ಸಾವಿರ ರೂಪಾಯಿಗಳ ಹೆಚ್ಚುವರಿ ನೆರವು ನೀಡಲಿದ್ದು ಈ ಮೂಲಕ ರೈತರಿಗೆ ವಾರ್ಷಿಕವಾಗಿ 12 ಸಾವಿರ ರೂಪಾಯಿಗಳ ಸಹಾಯಧನ ದೊರೆಯಲಿದೆ. 

Written by - Yashaswini V | Last Updated : Jun 17, 2023, 01:08 PM IST
  • ರೈತರಿಗೆ ಇದುವರೆಗೆ ಮುಖ್ಯಮಂತ್ರಿ ಕಿಸಾನ್-ಕಲ್ಯಾಣ ಯೋಜನೆಯಡಿ 4 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು.
  • ಇದಲ್ಲದೆ, ಪಿಎಂ ಕಿಸಾನ್ ಯೋಜನೆಯಡಿ 6,000 ರೂ.ಗಳನ್ನು ನೀಡಲಾಗುತ್ತಿತ್ತು.
  • ಇನ್ನು ಮುಂದೆ ರೈತ ಬಂಧುಗಳಿಗೆ 10 ಸಾವಿರ ರೂಪಾಯಿಗಳ ಬದಲಿಗೆ 12 ಸಾವಿರ ರೂ.ಗಳು ಲಭ್ಯವಾಗಲಿವೆ.
PM Kisan: ಇನ್ಮುಂದೆ ಈ ರಾಜ್ಯದ ರೈತರಿಗೆ ಪ್ರತಿ ವರ್ಷ ಸಿಗುತ್ತೆ 12 ಸಾವಿರ ರೂ. ಹಣ  title=

Kisan Kalyana Yojana: ಪ್ರಧಾನ್ ಮಂತ್ರಿ ಕಿಸಾನ್ ಸಮೃದ್ಧಿ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ 6,000 ರೂಪಾಯಿಗಳನ್ನು ನೀಡಲಾಗುತ್ತದೆ. ಇದೀಗ ಮಧ್ಯ ಪ್ರದೇಶ ಸರ್ಕಾರ, ಕಿಸಾನ್-ಕಲ್ಯಾಣ ಯೋಜನೆ ಅಡಿಯಲ್ಲಿ ರೈತರಿಗೆ 6 ಸಾವಿರ ರೂಪಾಯಿಗಳ ನೆರವನ್ನು ಘೋಷಿಸಿದ್ದು ಈ ರಾಜ್ಯದ ರೈತರಿಗೆ ವಾರ್ಷಿಕವಾಗಿ 12 ಸಾವಿರ ರೂ.ಗಳು ದೊರೆಯಲಿವೆ. 

ಮಧ್ಯ ಪ್ರದೇಶದ ರಾಜ್‌ಗಢ್ ಜಿಲ್ಲೆಯಲ್ಲಿ ನಡೆದ ಕಿಸಾನ್-ಕಲ್ಯಾಣ ಮಹಾಕುಂಭವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಇನ್ನು ಮುಂದೆ ರೈತ ಬಂಧುಗಳಿಗೆ 10 ಸಾವಿರ ರೂಪಾಯಿಗಳ ಬದಲಿಗೆ 12 ಸಾವಿರ  ರೂ.ಗಳು ಲಭ್ಯವಾಗಲಿವೆ. ಇದಕ್ಕಾಗಿ ಮುಖ್ಯಮಂತ್ರಿ ಕಿಸಾನ್-ಕಲ್ಯಾಣ ಯೋಜನೆಯಡಿ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡಲಿದೆ ಎಂದು ಘೋಷಿಸಿದರು. 

ಇದನ್ನೂ ಓದಿ- ʼಪ್ಯಾನ್ ಕಾರ್ಡ್ʼ ಫೋಟೋ ಮತ್ತು ʼಸಹಿʼಯಲ್ಲಿ ಸಮಸ್ಯೆ ಇದೆಯೇ..? ಹೀಗೆ ಅಪ್‌ಡೇಟ್‌ ಮಾಡಿ

ವಾಸ್ತವವಾಗಿ, ಮಧ್ಯ ಪ್ರದೇಶದ ರೈತರಿಗೆ ಇದುವರೆಗೆ ಮುಖ್ಯಮಂತ್ರಿ ಕಿಸಾನ್-ಕಲ್ಯಾಣ ಯೋಜನೆಯಡಿ 4 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಇದಲ್ಲದೆ, ಪಿಎಂ ಕಿಸಾನ್ ಯೋಜನೆಯಡಿ 6,000 ರೂ.ಗಳನ್ನು ನೀಡಲಾಗುತ್ತಿತ್ತು. 

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಈ ಘೋಷಣೆಯಿಂದಾಗಿ, ಈ ರಾಜ್ಯದ ರೈತ ಬಂಧುಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ವಾರ್ಷಿಕವಾಗಿ ನೀಡುವ 6 ಸಾವಿರ ರೂ.ಗಳನ್ನು ಒಳಗೊಂಡಂತೆ ಪ್ರತಿ ವರ್ಷ 12,000 ರೂ.ಗಳ ಆರ್ಥಿಕ ನೆರವು ದೊರೆಯಲಿದೆ. 

ಇದನ್ನೂ ಓದಿ- ಇನ್ನೇನು 3 ದಿನಗಳಲ್ಲಿ ಭಾರೀ ಅಗ್ಗದ ಬೆಲೆಗೆ ಚಿನ್ನ ಮಾರಾಟ: ಒಂದಲ್ಲ ಎರಡು ಬಾರಿ ಸಿಗಲಿದೆ ವಿಶೇಷ ಅವಕಾಶ

ರೈತರ ಖಾತೆಗೆ 6 ಸಾವಿರದ 423 ಕೋಟಿ ರೂ.:
ಇಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸಿಎಂ ಶಿವರಾಜ್ ಸಿಂಗ್ ಚೌಹಾಣ್  ಒಂದೇ ಕ್ಲಿಕ್‌ನಲ್ಲಿ ಮುಖ್ಯಮಂತ್ರಿ ರೈತರ ಬಡ್ಡಿ ಮನ್ನಾ ಯೋಜನೆ-2023ರ ಅಡಿಯಲ್ಲಿ 11 ಲಕ್ಷ ರೈತರ 2 ಸಾವಿರದ 123 ಕೋಟಿ ರೂ.ಗಳ ರೈತರ ಸಾಲದ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದಲ್ಲದೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ 44 ಲಕ್ಷ 49 ಸಾವಿರ ರೈತರ ಖಾತೆಗೆ  2 ಸಾವಿರದ 900 ಕೋಟಿ ರೂ.ಗಳು, ಮುಖ್ಯಮಂತ್ರಿ ಕಿಸಾನ್-ಕಲ್ಯಾಣ ಯೋಜನೆಯಡಿ ರೈತರ ಖಾತೆಗೆ 70 ಲಕ್ಷ 61 ಸಾವಿರ ರೈತರ ಖಾತೆಗೆ 1 ಸಾವಿರದ 400 ಕೋಟಿ ರೂ.ಗಳು ಈ ರೀತಿಯಾಗಿ ಒಟ್ಟು 6 ಸಾವಿರದ 423 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಯಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News